ಇದು ಲೆಕ್ಕ ಕೊಡುವ ಸಮಯ.
ಕೇವಲ ಮುನ್ನೂರ ಎಂಬತ್ತು ರೂಪಾಯಿಗಳನ್ನು ಇಟ್ಟುಕೊಂಡು ಮೊಬೈಕಿನ ಮೇಲೆ ಬೆಂಗಳೂರಿಗೆ ಬಂದಿಳಿದ ನಾನು ಇವತ್ತು ಏನಾದರೂ ಆಗಿದ್ದೇನೆ ಅಂದರೆ, ಅದು ’ಹಾಯ್ ಬೆಂಗಳೂರ್!’ ನಿಂದಾಗಿ. ಸತತ ಹದಿನೈದು ವರ್ಷ, ನಾಣು ನನ್ನ ಓದುಗ ದೊರೆಯ ಬಳಿ ನೌಕರಿ ಮಾಡಿದ್ದೇನೆ. ಧಣೀಗೆ ಲೆಕ್ಕ ಒಪ್ಪಿಸುವುದು ಕರ್ತವ್ಯ.
“ಪ್ರಾರ್ಥನಾ ಸ್ಕೂಲ್”ಗೆ ಎರಡು ಬಸ್ ಖರೀದಿಸಿದ್ದು ಬಿಟ್ಟರೆ ಈ ವರ್ಷ ಯಾವುದೇ ವಹನಗಳ ಖರೀದಿಯಾಗಿಲ್ಲ. ನನ್ನ ಓಡಾಟಕ್ಕೆ ಸ್ಕೋಡಾ ಮತ್ತು ವೋಕ್ಸ್ ವ್ಯಾಗನ್ ಕಾರುಗಳಿವೆ. ಹೆಚ್ಚಿನ ಓಡಾಟ ಸ್ಕೋಡಾದಲ್ಲೇ. ನಿಮಗೆ ಗೊತ್ತು: ಈ ವರ್ಷದ ಎರಡನೆಯ ಅರ್ಧದಲ್ಲಿ ನಾನು ಓಡಾಡಿದ್ದು ಕಡಿಮೆ ಆಫೀಸಿನವರ ಓಡಾಟಕ್ಕೆ ಮಾರುತಿ ಓಮ್ನಿ ಇದೆ. ನನ್ನ ಪ್ರೀತಿಯ ಇಂಡ್ ಸುಜುಕಿ ಮತ್ತು ಬುಲೆಟ್ ಮೊಬೈಕ್ಗಳು ಷೆಡ್ನಲ್ಲಿ ನಿಂತೇ ಇವೆ: ಥಳ ಥಳ. ಈ ವರ್ಷ ನಾನು ಹೊಸ ಅಂಗಿಗಳನ್ನೂ ಖರೀದಿಸಿಲ್ಲ. ಬರಗೆಟ್ಟವನಂತೆ ಖರೀದಿ ಮಾಡಿದ್ದು ಕೇವಲ ಪುಸ್ತಕಗಳನ್ನ.
ಕರ್ಣನ ಹೆಸರಿನಲ್ಲಿ ಬೆಂಗಳೂರಿನ ಹೊರವಲಯದ ’ಕರಿಷ್ಮಾ ಹಿಲ್ಸ್’ನಲ್ಲಿ ಒಂದು ಸೈಟು ಖರೀದಿಸಿದ್ದೇನೆ. ಅಲ್ಲಿ ಹೊಸ ಮನೆಯ ನಿರ್ಮಾಣ ಆರಂಭವಾಗಿದೆ. ಪದ್ಮನಾಭನಗರದ ’ಅಮ್ಮ’ ಮನೆ, ಒಂದು ಫ್ಲ್ಯಾಟ್ ಭಾವನಾಳಿಗೆ ಕೊಟ್ಟಾಗಿದೆ. ಶೇಷಾದ್ರಿಪುರದ ಮನೆ ಚೇತನಾಗೆ ಕೊಟ್ಟಾಯಿತು. ಸದ್ಯಕ್ಕೆ ಬನಶಂಕರಿಯ ಮನೆ ’ಅಮ್ಮೀಜಾನ್’ನಲ್ಲಿ ಲಲಿತೆ, ಅತ್ತೆ, ಮಕ್ಕಳು, ಮೊಮ್ಮಕ್ಕಳು ನಾನು ಮತ್ತು ನಾಯಿ! ನಿವೇದಿತ ಖರೀದಿಸಿದ್ದ ಮನೆಯೊಂದನ್ನು ಕಳೆದ ವರ್ಷ ನಾನು ಖರೀದಿಸಿದ್ದೆ. ಈ ವರ್ಷ, ಅದನ್ನು ನಾನು ಮತ್ತು ನಮ್ಮ ಹುಡುಗ ಸೀನನಿಗೆ ಉಡುಗೊರೆಯಾಗಿ ಕೊಟ್ಟೆ. ಅವನು ಸುಮಾರು ಮೂವತ್ತು ವರ್ಷದಿಂದ ನನ್ನೊಂದಿಗಿದ್ದಾನೆ, ನನ್ನ ನೆರಳಿನಂತೆ, ಇನ್ನು ಈ ಆಫೀಸು. ’ನನಗೆ ಇಲ್ಲೇ ಬೃಂದಾವನ!’ ಅಂತ ಗೆಳೆಯರಲ್ಲಿ ತಮಾಷೆ ಮಾಡುತ್ತಿರುತ್ತೇನೆ. ಬ್ರಾಹ್ಮಣರ ಭಾಷೆಯಲ್ಲಿ ಬೃಂದಾವನ ಎಂದರೆ ಸಮಾಧಿ. ಇದು ನನ್ನ ಸ್ವಂತದ್ದು. ನನಗೆ ಸಾಲ ಕೂಡ ಇದೆ. ಅದರ ಮೊತ್ತ ನಾಲ್ಕು ಕೋಟಿ ರೂಪಾಯಿ. ನನಗಿರುವ ಒಂದೇ ಬ್ಯಾಂಕು, ಕರ್ಣಾಟಕ ಬ್ಯಾಂಕು.
ಕಳೆದ ಸಾಲಿನಲ್ಲಿ ನಾನು ಕಟ್ಟಿರುವ ಇನ್ಕಮ್ ಟ್ಯಾಕ್ಸ್ ಊವತ್ನಾಲ್ಕು ಲಕ್ಷದ ನಲವತ್ನಾಲ್ಕು ಸಾವಿರದ ಐದು ನೂರು ರುಪಾಯಿ (೫೪,೪೪,೪೫೦/- ರೂ). “ಪತ್ರಿಕೆ” ಮತ್ತು ಪುಸ್ತಕ ಪ್ರಕಾಶನಗಳು ಲಾಭದಲ್ಲಿವೆ. ’ಹಾಯ್ ಬೆಂಗಳೂರ್!”ನ ಸಿಬ್ಬಂದಿಗೆ ಪ್ರತೀ ತಿಂಗಳು ಕೊಡುವ ಸಂಬಳ ನಾಲ್ಕು ಲಕ್ಷದ ಇಪ್ಪತ್ತು ಸಾವಿರ. “ಪ್ರಾರ್ಥನಾ” ದಲ್ಲಿ ೩೪೯ ಜನ ಸಿಬ್ಬಂದಿಯವರಿದ್ದಾರೆ. ಅವರಿಗೆ ಸಂದಾಯವಾಗುವ ವಾರ್ಷಿಕ ಸಂಬಳ: ೨ ಕೋಟಿ ೮೨ ಲಕ್ಷ ರುಪಾಯಿ. ಅಲ್ಲಿ ಓದುತ್ತಿರುವ ಮಕ್ಕಳ ಸಂಖ್ಯೆ ೫,೯೦೦. “ಪ್ರಾರ್ಥನಾ”ಗೆ ನಾಲ್ಕು ಸ್ವಂತ ಕಟ್ಟಡಗಳು, ಚಿಕ್ಕ ಆಟದ ಬಯಲು ಇದ್ದು, ಎರಡು ಕಟ್ಟಡಗಳನ್ನು ಬಾಡಿಗೆಗೆ ಪಡೆದಿದ್ದೇನೆ. ನಮ್ಮಲ್ಲಿ ಅತಿ ಹೆಚ್ಚಿನ ಸಂಬಳ ಪಡೆಯುವಾಕೆ ನಿವೇದಿತಾ. ಈ ವರ್ಷ ಕೂಡ ಎಸೆಸೆಲ್ಸಿಯಲ್ಲಿ ನೂರಕ್ಕೆ ನೂರು ವಿದ್ಯಾರ್ಥಿಗಳು ತೇರ್ಗಡೆಯಾದುದಕ್ಕೆ ಪ್ರಿನ್ಸಿಪಾಲ್ ಶೀಲಕ್ಕನಿಗೆ ಸರ್ಕಾರ ಪ್ರಶಸ್ತಿ ನೀಡಿ ಗೌರವಿಸಿದೆ.
ನನ್ನ ಲಾಭದ ಒಂದಷ್ಟು ಪರ್ಸೆಂಟ್ ಹಣವನ್ನು ವಿದ್ಯಾರ್ಥಿಗಳಿಗೆ, ಖಾಯಿಲೆಯವರಿಗೆ ಖರ್ಚು ಮಾಡುವುದು ನಿಮಗೆ ಗೊತ್ತು. ತೀರಿಹೋದ ಮಿತ್ರ “ಸೀತಾನದಿ ಸುರೇಂದ್ರ’ ನ ಹೆಸರಿನ ಸ್ಕಾಲರ್ಷಿಪ್ ಯೋಜನೆಯ ಅಡಿಯಲ್ಲಿ ತುಂಬಾ ಮಕ್ಕಳು ಓದುತ್ತಿದ್ದಾರೆ. ಇಂಜನೀಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಿಂದ ಹಿಡಿದು ಹೈಸ್ಕೂಲುಗಳ ತನಕ ವಿವಿಧ ಕಡೆಗಳಲ್ಲಿ ಓದುತ್ತಿದ್ದಾರೆ. ಈ ವರ್ಷದ ವಿಶೇಷವೇನೆಂದರೆ, ಒಬ್ಬ ಪ್ರತಿಭಾವಂತ ಹುಡುಗಿ ಐ.ಎ.ಎಸ್ ಮಾಡುತ್ತಿದೆ. ಅನೇಕ ಹೃದ್ರೋಗಿಗಳು, ಮೂತ್ರಪಿಂಡ ವಿಫಲವಾದವರು, ಕ್ಯಾನ್ಸರ್ ವಿರುದ್ದ ಬಡಿದಾಡುತ್ತಿರುವವರು, ಹೆಚ್.ಐ.ವಿ ಸೋಂಕು ತಗುಲಿದವರು-ನೆರವು ಪಡೆಯುತ್ತಿದ್ದಾರೆ.
ಇವೆಲ್ಲ ಹಣ ಓದುಗ ದೊರೆಗಳದು.
ನನ್ನದು ಕೇವಲ ಬಟವಾಡೆಯ ಜವಾಬ್ದಾರಿ. ಅಂದ ಹಾಗೆ, ನನ್ನ ಸೋಮಾರಿತನದಿಂದಾಗಿ ಈ ವರ್ಷ ಒಂದೇ ಒಂದೂ ಪುಸ್ತಕ ಬರೆದಿಲ್ಲ. “ಓ ಮನಸೇ…” ಸ್ಥಗಿತಗೊಂಡದ್ದಕ್ಕೂ ಅದೇ ಕಾರಣ.
ಪತ್ರಿಕೆ ಆರಂಭವಾದಾಗಿನಿಂದ ನನ್ನೊಂದಿಗೆ ಸ್ಥಿರವಾಗಿ ನಿಂತಿರುವ ಗೆಳೆಯರ ಪೈಕಿ ಆರ್.ಟಿ.ವಿಠ್ಠಲಮೂರ್ತಿ ನನಗೆ ಅತ್ಯಂತ ಆಪ್ತ. ಇನ್ನೇನು ಲೆಕ್ಕ ಕೊಡಲಿ?
-ಬೆಳಗೆರೆ




hi
gurugale lekka cheanage kodutira adare nam lekkada prkara hibangaloreli nivu nillisida kadambari nivu namge kodabekiro sala dayvittu addan matte bredu prkatisi nam sala tiristira annta kayta iddivi
enti nimma oduga
manohar
hi ravi sir nim lekka chennag kottidira. Nange nim “O Manase” magzine thumb ista agitu adre neev adann stop madbittidira dayavittu adannu mathe start madi plz ravi sir.
Jyothi R.
“ಓ ಮನಸೇ…” ಸ್ಥಗಿತಗೊಂಡದ್ದಕ್ಕೂ ಅದೇ ಕಾರಣ
“ಓ ಮನಸೇ…” ಸ್ಥಗಿತಗೊಂಡದ್ದಕ ಕಾರಣ
Ravi anna barree rokkada lekka kotre henge ree. namage “O MANASE” kottu Namma saala teersanna
Siddesh Sangameswara