ಕೇಳಿ-೫

ಪ್ರಶ್ನೆ: ದೇವೇಗೌಡರು ಉಗುರು ಕಚ್ಚೋ ಅಭ್ಯಾಸ ಬಿಡೋದಿಲ್ಲವಾ?

ಉ: ಗೊತ್ತಿಲ್ಲಪ್ಪ: ಮೊನ್ನೆ ಜಗುಲಿ ಮೇಲೆ ಕೂತು ಕಾಲಿನ ಉಗುರು ಕಚ್ಕೋತಿದ್ರು!

ಪ್ರಶ್ನೆ: ಸಿದ್ದು ತೊಲಗಿದ ಮೇಲೆಯಾದರೂ ಕಾಂಗ್ರೆಸ್ಸು ಉದ್ದಾರವಾದೀತೆ?

ಉ: ಪಾದಯಾತ್ರೆ ನಂತರ ಅವರಿಗೆ ಕಾಲುರೋಗ: ತೇಜಮ್ಮನಿಗೆ ಬಾಯಿರೋಗ ಅಂತಾರೆ!

ಪ್ರಶ್ನೆ: ದಂಪತಿಗಳು ಪರಸ್ಪರ ಅರಿಯುವ ಮೊದಲೇ ಮಗು ಆಗಿಬಿಡುತ್ತದಲ್ಲ?

ಉ: ಹೀಗಾಗಿಯೇ ಅನೇಕ ದಾಂಪತ್ಯಗಳು ಡಿವೋರ್ಸ್‌ನಿಂದ ಬಚಾವಾಗುತ್ತವೆ!

ಪ್ರಶ್ನೆ: ಹೆಗಡೆಯವರ ಪ್ರೇತಾತ್ಮವೇ ದೇವೇಗೌಡರನ್ನು ದಾರಿ ತಪ್ಪಿಸುತ್ತಿದೆಯಂತೆ?

ಉ: ನಿಜ, ವಿಧಾನಸೌದ ಮೈಸೂರು ಕಡೆಗಿದೆ ಅಂತ ನಂಬಿಸಿ ನೈಸ್ ರಸ್ತೇಲಿ ಬಿಟ್ಟಂತಿದೆ!

ಪ್ರಶ್ನೆ: ಶೋಭಕ್ಕ ಯಶಸ್ಸಿನ ಹಿಂದೆ ಸಿಮ್ಮನ ಹಾರೈಕೆ ಇದೆಯಂತೆ?

ಉ: ಅಕ್ಕಯ್ಯ ಮಂತ್ರಿಯಾದುದಕ್ಕೆ ಪಾವಗಡದ ಶನೈಶ್ವರನಿಗೆ ಮುಡಿ ಕೊಟ್ಟನಂತೆ!

ಪ್ರಶ್ನೆ: ಮಾತ್ರೆ ತಗೊಂಡು ಮಲಗಿದರೂ ಗೌಡರಿಗೆ ನಿದ್ದೆ ಬರುತ್ತಿಲ್ಲವಂತೆ?

ಉ: ಮಾವಾ..ನೀವು ನುಂಗಿದ್ದು ಸಂತಾನ ನಿಯಂತ್ರಣ ಮಾತ್ರೇ…ಅಂತ ಚೀರಿದಳು ರಾಧಿಕಾ!

ಪ್ರಶ್ನೆ: ಯಡ್ಡಿ ಕೊಟ್ಟ ಸೈಕಲ್ ಕಲಿಸ್ತೀನಿ ಬಾ ಅಂದ್ರೆ ಬರಲ್ಲ ಅಂತಾಳೆ?

ಉ: ಗೂಳಿ ಶೇಖರ ಕ್ಯಾರಿಯರ್‍‌ನಿಂದ ಬಿದ್ದದನ್ನು ನೋಡಿ ಜಾಗೃತಳಾಗಿದ್ದಾಳೆ.

ಪ್ರಶ್ನೆ: ಟೀವಿ ನೋಡಿದರೆ ಬೇಜಾರಾಗುತ್ತದಲ್ಲ?

ಉ: ’ಬಾಟ್ಲಿ ಹುಡುಗರ ಪಾಕೆಟ್ ಲೈಫ್’ ಅಂತ ಮಲ್ಯ ಆರಂಭಿಸಿದ್ದಾನೆ.

ಪ್ರಶ್ನೆ: ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಾಥಮಿಕ ಶಿಕ್ಷಣ ಸಚಿವ ಖಾತೆ ಏಕೆ ಕೊಟ್ಟಿದ್ದಾರೆ?

ಉ: ಹೈಟು ನೋಡಿ ಕೊಟ್ಟಿದ್ದಿದ್ದರೆ ಉನ್ನತ ಶಿಕ್ಷಣ ಖಾತೆ ಕೊಡಬೇಕಿತ್ತು: ಬುದ್ದಿ ನೋಡಿದ್ದಾರೆ.

ಪ್ರಶ್ನೆ: ಕೆಟ್ಟ ಮೇಲೆ ಬುದ್ದಿ ಬರೋದಂದ್ರೆ ಏನು?

ಉ: ಪತ್ರಿಕೆ ಶುರು ಮಾಡೋ ಹೊತ್ತಿಗೆ ಅದಿನ್ನೆಷ್ಟು ಕೆಟ್ಟಿರಬೇಕು ನಾನು: ಯೋಚಿಸಿ.

-ಬೆಳಗೆರೆ

1 Responses to ಕೇಳಿ-೫

  1. ಶೇಖರ್ ಹೇಳುತ್ತಾರೆ:

    ರವಿ ಅಂಕಲ್
    I want to meet u.

    can u give me ur 5 minutes. pls

ನಿಮ್ಮ ಟಿಪ್ಪಣಿ ಬರೆಯಿರಿ