ಪ್ರಶ್ನೆ: ದೇವೇಗೌಡರು ಉಗುರು ಕಚ್ಚೋ ಅಭ್ಯಾಸ ಬಿಡೋದಿಲ್ಲವಾ?
ಉ: ಗೊತ್ತಿಲ್ಲಪ್ಪ: ಮೊನ್ನೆ ಜಗುಲಿ ಮೇಲೆ ಕೂತು ಕಾಲಿನ ಉಗುರು ಕಚ್ಕೋತಿದ್ರು!
ಪ್ರಶ್ನೆ: ಸಿದ್ದು ತೊಲಗಿದ ಮೇಲೆಯಾದರೂ ಕಾಂಗ್ರೆಸ್ಸು ಉದ್ದಾರವಾದೀತೆ?
ಉ: ಪಾದಯಾತ್ರೆ ನಂತರ ಅವರಿಗೆ ಕಾಲುರೋಗ: ತೇಜಮ್ಮನಿಗೆ ಬಾಯಿರೋಗ ಅಂತಾರೆ!
ಪ್ರಶ್ನೆ: ದಂಪತಿಗಳು ಪರಸ್ಪರ ಅರಿಯುವ ಮೊದಲೇ ಮಗು ಆಗಿಬಿಡುತ್ತದಲ್ಲ?
ಉ: ಹೀಗಾಗಿಯೇ ಅನೇಕ ದಾಂಪತ್ಯಗಳು ಡಿವೋರ್ಸ್ನಿಂದ ಬಚಾವಾಗುತ್ತವೆ!
ಪ್ರಶ್ನೆ: ಹೆಗಡೆಯವರ ಪ್ರೇತಾತ್ಮವೇ ದೇವೇಗೌಡರನ್ನು ದಾರಿ ತಪ್ಪಿಸುತ್ತಿದೆಯಂತೆ?
ಉ: ನಿಜ, ವಿಧಾನಸೌದ ಮೈಸೂರು ಕಡೆಗಿದೆ ಅಂತ ನಂಬಿಸಿ ನೈಸ್ ರಸ್ತೇಲಿ ಬಿಟ್ಟಂತಿದೆ!
ಪ್ರಶ್ನೆ: ಶೋಭಕ್ಕ ಯಶಸ್ಸಿನ ಹಿಂದೆ ಸಿಮ್ಮನ ಹಾರೈಕೆ ಇದೆಯಂತೆ?
ಉ: ಅಕ್ಕಯ್ಯ ಮಂತ್ರಿಯಾದುದಕ್ಕೆ ಪಾವಗಡದ ಶನೈಶ್ವರನಿಗೆ ಮುಡಿ ಕೊಟ್ಟನಂತೆ!
ಪ್ರಶ್ನೆ: ಮಾತ್ರೆ ತಗೊಂಡು ಮಲಗಿದರೂ ಗೌಡರಿಗೆ ನಿದ್ದೆ ಬರುತ್ತಿಲ್ಲವಂತೆ?
ಉ: ಮಾವಾ..ನೀವು ನುಂಗಿದ್ದು ಸಂತಾನ ನಿಯಂತ್ರಣ ಮಾತ್ರೇ…ಅಂತ ಚೀರಿದಳು ರಾಧಿಕಾ!
ಪ್ರಶ್ನೆ: ಯಡ್ಡಿ ಕೊಟ್ಟ ಸೈಕಲ್ ಕಲಿಸ್ತೀನಿ ಬಾ ಅಂದ್ರೆ ಬರಲ್ಲ ಅಂತಾಳೆ?
ಉ: ಗೂಳಿ ಶೇಖರ ಕ್ಯಾರಿಯರ್ನಿಂದ ಬಿದ್ದದನ್ನು ನೋಡಿ ಜಾಗೃತಳಾಗಿದ್ದಾಳೆ.
ಪ್ರಶ್ನೆ: ಟೀವಿ ನೋಡಿದರೆ ಬೇಜಾರಾಗುತ್ತದಲ್ಲ?
ಉ: ’ಬಾಟ್ಲಿ ಹುಡುಗರ ಪಾಕೆಟ್ ಲೈಫ್’ ಅಂತ ಮಲ್ಯ ಆರಂಭಿಸಿದ್ದಾನೆ.
ಪ್ರಶ್ನೆ: ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪ್ರಾಥಮಿಕ ಶಿಕ್ಷಣ ಸಚಿವ ಖಾತೆ ಏಕೆ ಕೊಟ್ಟಿದ್ದಾರೆ?
ಉ: ಹೈಟು ನೋಡಿ ಕೊಟ್ಟಿದ್ದಿದ್ದರೆ ಉನ್ನತ ಶಿಕ್ಷಣ ಖಾತೆ ಕೊಡಬೇಕಿತ್ತು: ಬುದ್ದಿ ನೋಡಿದ್ದಾರೆ.
ಪ್ರಶ್ನೆ: ಕೆಟ್ಟ ಮೇಲೆ ಬುದ್ದಿ ಬರೋದಂದ್ರೆ ಏನು?
ಉ: ಪತ್ರಿಕೆ ಶುರು ಮಾಡೋ ಹೊತ್ತಿಗೆ ಅದಿನ್ನೆಷ್ಟು ಕೆಟ್ಟಿರಬೇಕು ನಾನು: ಯೋಚಿಸಿ.
-ಬೆಳಗೆರೆ
ರವಿ ಅಂಕಲ್
I want to meet u.
can u give me ur 5 minutes. pls